ಪುತ್ತೂರು : ಇತಿಹಾಸ ಪ್ರಸಿದ್ಧ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಎಂದೇ ಪ್ರಸಿದ್ಧವಾದ ಇರ್ದೆ ಬೆಂದ್ರ್ ತೀರ್ಥದಲ್ಲಿ ಸೆಪ್ಟೆಂಬರ್ 11 ಶುಕ್ರವಾರ ಅಮವಾಸ್ಯೆಯಂದು ಪುಣ್ಯ ತೀರ್ಥಸ್ನಾನ ಸಡೆಯಲಿದೆ.
ಪ್ರಕೃತಿಸಹಜವಾದ ಈ ಬಿಸಿನೀರಿನ ಚಿಲುಮೆಯಲ್ಲಿ ಅಧಿಕ ಮಟ್ಟದ ಖನಿಜಾಂಶಗಳಿದ್ದು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ.
ಇಲ್ಲಿ ತೀರ್ಥಸ್ನಾನದಂದು ಹಣ್ಣುಕಾಯಿ ವೀಲ್ಯದೆಲೆ ಮತ್ತು ಅಡಿಕೆ ಸಮರ್ಪಣೆ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.












